Breaking News

ಬೆಳ್ತಂಗಡಿ: ನಕ್ಸಲ್ ನಿಗ್ರಹ ಪಡೆಯಿಂದ ಕೂಬಿಂಗ್

ಬೆಳ್ತಂಗಡಿ : ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ ದಿಡುಪೆ, ನಾವೂರು, ನಡ ಗ್ರಾಮಗಳ ಕುದುರೇಮುಖ ರಾಷ್ಟ್ರೀಯ ಉಧ್ಯಾನವನದೊಳಗೆ ಮಳೆಗಾಲದ ಮುನ್ನೆಚ್ಚರಿಕೆಯ ಕ್ರಮವಾಗಿ ನಕ್ಸಲ್ ನಿಗ್ರಹ ಪಡೆಯ ನೇತೃತ್ವದಲ್ಲಿ ಗುರುವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

ನಕ್ಸಲ್ ಚಟುವಟಿಕೆ ಬಗ್ಗೆ ಏನಾದರು ಕುರುಹುಗಳಿವೆಯೇ ಎಂಬುದರ ಬಗ್ಗೆ ನಕ್ಸಲ್ ನಿಗ್ರಹ ಪಡೆಯಿಂದ ಶೋಧ ಕಾರ್ಯ ನಡೆದಿದೆ.

ಈ ಪ್ರದೆಶದಲ್ಲಿ ಕಳೆದ ಮಳೆಗಾಲದಲ್ಲಿ ಭಾರಿ ಭೂಕುಸಿತ ಹಾಗೂ ಪ್ರವಾಹ ಸಂಬವಿಸಿದಾಗಲೂ ನಕ್ಸಲ್ ನಿಗ್ರಹ ಪಡೆಯವರೇ ಅರಣ್ಯದೊಳಗಿನ ಜನರ ನೆರವಿಗೆ ಬಂದಿದ್ದರು.

ಇದೀಗ ಮತ್ತೆ ಪ್ರವಾಹದ ಭಯವಿರುವ ಹಿನ್ನಲೆಯಲ್ಲಿ ಈ ಪ್ರದೇಶಗಳ ಪರಿಶೀಲನೆಯನ್ನೂ ನಡೆಸಲಾಗಿರುವುದಾಗಿ ತಿಳಿದುಬಂದಿದೆ. ಸುಮಾರು ಹತ್ತುಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×