Breaking News

ದಕ್ಷಿಣ ಕನ್ನಡ ಜಿಲ್ಲೆಯ ಗೋಶಾಲೆಗಳಿಗೆ ಅನುದಾನ ಬಿಡುಗಡೆ

ಮಂಗಳೂರು : ಕೊರೊನಾ ಲಾಕ್‍ಡೌನ್ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಂಕಷ್ಠಕ್ಕೀಡಾಗಿರುವ ಗೋಶಾಲೆಗಳಿಗೆ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಅನುದಾನ ಮಂಜೂರು ಮಾಡಲು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಗೋಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿರುವ ವಿವರ ಇಂತಿವೆ : ಶ್ರೀ ವಿಶ್ವೇಶತೀರ್ಥ ಗೋ ಸಂರಕ್ಷಣಾ ಕೇಂದ್ರ ಗೋಶಾಲೆ, ಭಾರತ ಸೇವಾಶ್ರಮ, ಕನ್ಯಾನ, ಬಂಟ್ವಾಳ ತಾ. – ರೂ. 2 ಲಕ್ಷ ಗೋವನಿತಾಶ್ರಯ ಟ್ರಸ್ಟ್ ಗೋಶಾಲೆ, ಪಜೀರು– ರೂ. 5 ಲಕ್ಷ , ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಕ್ಷೇತ್ರ, ಗೋಶಾಲೆ, ಕೊಕ್ಕಡ – ರೂ. 1 ಲಕ್ಷ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ರಿ) ಕಾಮಧೇನು ಗೋಶಾಲೆ, ಕೊಕ್ಕಡ – ರೂ. 2 ಲಕ್ಷ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ನಂದಿನಿ ಗೋಶಾಲೆ – ರೂ. 2 ಲಕ್ಷ, ಗುರುದೇವ ಚಾರಿಟೆಬಲ್ ಕಮಿಟಿ ಕರೋಪಾಡಿ – ರೂ. 2 ಲಕ್ಷ, ಶ್ರೀ ಪರಾಶಕ್ತಿ ಟ್ರಸ್ಟ್, ಶ್ರೀ ಪರಾಶಕ್ತಿ ದೇಗುಲ ಸಮುಚ್ಛಯ, ಕೋಟೆಕಾರು – ರೂ. 2 ಲಕ್ಷ, ಸಿಯಾನ್ ಆಶ್ರಮ್, ಗಂಡಿಬಾಗಿಲು- ರೂ. 1 ಲಕ್ಷ, ಶ್ರೀ ರಾಮ್ ಗೋಶಾಲೆ – ರೂ. 2 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಆಯ್ತುಕರ ಪ್ರಕಟಣೆ ತಿಳಿಸಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×