Breaking News

ಉಡುಪಿ : ತುಳುನಾಡ ದೈವ ಕೊರಗಜ್ಜನ ಮತ್ತೊಂದು ಕಾರ್ಣಿಕ – ನಿದ್ದೆಗಣ್ಣಲ್ಲಿ ಮಧ್ಯ ರಾತ್ರೀಲಿ ಬೀದಿಗೆ ಬಂದ ಮಗುವನ್ನು ರಕ್ಷಿಸಿದ ದೈವ..!?

ಉಡುಪಿ: ದೈವ- ದೇವರ ನಾಡು ತುಳುನಾಡು ಕಾರ್ಣಿಕಗಳ ಪುಣ್ಯ ಭೂಮಿ ಕೂಡ ಹೌದು, ದಿನ ನಿತ್ಯ ಅನೇಕ ಪವಾಡಗಳು ಈ ಮಣ್ಣಿನಲ್ಲಿ ಘಟಿಸುತ್ತಿವೆ.

ಇದೀಗ ಅಂತಹುದೇ ಪವಾಡ ಈ ಕರಾವಳಿಯ ಮಣ್ಣಲ್ಲಿ ನಡೆದಿದೆ ಎನ್ನಲಾಗಿದ್ದು, ಇದು ತುಳುನಾಡ ದೈವ ಕೊರಗಜ್ಜನ ಮಹಿಮೆ ಎಂದೇ ಭಕ್ತರು ನಂಬಿದ್ದಾರೆ.

ಉಡುಪಿಯ ಕುಂದಾಪುರ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ನಿನ್ನೆ ರಾತ್ರಿ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಿದ್ದೆ ಕಣ್ಣಲ್ಲಿ ಆ ಕರಾಳ ರಾತ್ರಿಯಲ್ಲಿ ನಡೆಯುತ್ತಿದ್ದ ಮಗುವನ್ನು ಕೊರಗಜ್ಜ ತಡೆದು ನಿಲ್ಲಿಸಿ ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ನಿದ್ದೆ ಕಣ್ಣಿನಿಂದ ರಾತ್ರಿಯ ಮೂರು ಗಂಟೆ ಸುಮಾರಿಗೆ ರಸ್ತೆಯಲ್ಲಿ ಒಂಟಿಯಾಗಿ ಏನು ಅರಿಯದ ಸುಮಾರು ಆರು ವರ್ಷದ ಹೆಣ್ಣು ಮಗು ನಡೆದುಕೊಂಡು ಬಂದು ಕೊರಗಜ್ಜ ದೈವಸ್ಥಾನ ನಾಮಪಲಕದ ಬಳಿ ನಿಂತಿದೆ.

ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವವರು ಮಗುವನ್ನು ನೋಡಿ ಕಾರು ನಿಲ್ಲಿಸಿದ್ದಾರೆ.

ಬಳಿಕ ಮಗುವಿನ ಬಳಿ ಹೋಗಿ ಮಾತಾಡಿಸಿದಾಗ ನಿದ್ದೆ ಕಣ್ಣಿನಿಂದ ನಡೆದುಕೊಂಡು ಬಂದ ವಿಷಯ ಬೆಳಕಿಗೆ ಬಂದಿದ್ದು, ಮಗುವನ್ನು ಸುರಕ್ಷಿತವಾಗಿ ಮರಳಿ ಮನೆಗೆ ಹೋಗಿ ಬಿಟ್ಟು ಮಾನವೀಯತೆ ಮರೆದಿದ್ದಾರೆ.

ಕೊರಗಜ್ಜನ ಪವಾಡದಿಂದಲೇ ಏನೂ ಅಪಾಯವಾಗದೆ ಮಗು ಪಾರಾಗಿ ಬಂದಿದೆ ಅಂತ ಭಕ್ತರು ನಂಬಿ ನಂಬಿದ್ದಾರೆ.

ಮಗುವಿನ ಪೋಷಕರ ಸ್ಪಷ್ಟನೆ :

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಮನೆಮಂದಿ ಅಸಮಧಾನಗೊಂಡಿದ್ದು, ಇದೀಗ ಮಗುವಿನ ಅಮ್ಮ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಮಗುವಿಗೆ ರಾತ್ರಿ ನಿದ್ದೆಗಕಣ್ಣಿನಲ್ಲಿ ನಡೆದುಕೊಂಡು ಹೋಗುವ ಅಭ್ಯಾಸವಿದೆ. ಇದೇ ಕಾರಣಕ್ಕೆ ಮಗು ರಾತ್ರಿ ವೇಳೆ ನಡೆದುಕೊಂಡು ಚಿಲಕ ತೆಗೆದು ಹೊರ ಬಂದಿದೆ. ಪಕ್ಕದ ಮನೆಗೆ ಹೋಗಿದ್ದಾಳೆ.

ರೋಡಿಗೆ ಹೋಗಿಲ್ಲ. ವಿಡಿಯೋದಲ್ಲಿ ಹೇಳಿರುವಂತೆ ಮೂರ್ನಾಲ್ಕು ಕಿಲೋ ಮೀಟರ್‌ ದೂರ ಹೋಗಿಲ್ಲ.

ಇದನ್ನು ವೈರಲ್‌ಗೋಸ್ಕರ ಮಾಡಿದ್ದಾರೆ. ಒಂದು ಹೆಣ್ಣುಮಗುವಿನ ವಿಡಿಯೋವನ್ನು ಈ ರೀತಿ ವೈರಲ್‌ ಮಾಡುವುದು ಸರಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಟ್ಟಿನಲ್ಲಿ ಕೊರಗಜ್ಜನ ಪವಾಡವೋ, ಜನರ ನಂಬಿಕೆಯೋ ಮಗು ಮಾತ್ರ ಸುರಕ್ಷಿತವಾಗಿ ಅಮ್ಮನ ಮಡಿಲು ಸೇರಿರುವುದು ನೆಮ್ಮದಿಯ ಸಂಗತಿ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×