Breaking News

ವಲಸೆ ಕಾರ್ಮಿಕರನ್ನು ಉಚಿತವಾಗಿ ಊರಿಗೆ ಕಳುಹಿಸಲೆಂದು ಕಾಂಗ್ರೆಸ್‌ ನೀಡಿದ ಚೆಕ್‌ ನಕಲಿ’ – ಆರ್‌.ಅಶೋಕ್‌ ಆರೋಪ

ಬೆಂಗಳೂರು : ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಉಚಿತವಾಗಿ ಕಳುಹಿಸಲೆಂದು ಕಾಂಗ್ರೆಸ್‌ ಅಧ್ಯಕ್ಷರು ನೀಡಿದ ಚೆಕ್‌ ನಕಲಿ. ಇವರಿಗೆ ಖಾತೆ ಬದಲಾವಣೆ ಮಾಡುವ ಜ್ಞಾನ ಇಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಲಸೆ ಕಾರ್ಮಿಕರಿಗೆ ಉಚಿತವಾಗಿ ತಮ್ಮ ಊರುಗಳಿಗೆ ತೆರಳಲು ಕಾಂಗ್ರೆಸ್‌ ಅಧ್ಯಕ್ಷರು ನೀಡಿದ ಚೆಕ್‌ನ ಮೇಲೆ ದಿನೇಶ್‌ ಗುಂಡೂರಾವ್‌ ಅವರ ಸಹಿ ಇದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಇವರ ನಡುವೆ ಒಳ ಜಗಳವಿದೆಯೋ ಏನೋ ತಿಳಿದಿಲ್ಲ. ಆದರೆ, ಚೆಕ್‌ನ ಮೇಲೆ ಡಿ.ಕೆ.ಶಿವಕುಮಾರ್‌ ಅವರ ಸಹಿ ಮಾತ್ರ ಇಲ್ಲ. ಹಾಗಾಗಿ ಚೆಕ್‌ ಸಹ ನಕಲಿ. ಖಾತೆ ಬದಲಾವಣೆ ಮಾಡುವ ಜ್ಞಾನ ಇವರಿಗಿಲ್ಲ. ನಮಗೆ ಬಸ್‌ ಬಿಡುವ ಬಗ್ಗೆ ಸಲಹೆ ನೀಡಲು ಬರುತ್ತಾರೆ ಎಂದರು.

ಕಾಂಗ್ರೆಸ್‌ ನಾಯಕರು ನಿನ್ನೆ ಸುಮಾರು ಐದು ಸಾವಿರ ಜನರ ನಡುವೆ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ. ಈ ಜನರ ನಡುವೆ ಯಾರಿಗಾದರೂ ಸೋಂಕು ಇದೆಯೋ ಎನ್ನುವ ಪರಿಜ್ಞಾನವೂ ಅವರಲಿಲ್ಲ. ಹಾಗಿರುವಾಗ ಬೇರೆಯವರಿಗೆ ಹೇಳುವ ನೈತಿಕತೆ ಅವರಿಗಿಲ್ಲ. ಹಾಗಾಗಿ ಅವರಿಗೂ ತಪಾಸಣೆ ಮಾಡಬೇಕು. ಅಲ್ಲದೇ ಅವರಿಗೂ ಕ್ವಾರಂಟೈನ್‌ ಮಾಡುವ ಚಾನ್ಸ್‌ ಬರಬಹುದು. ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಮತ್ತು ಸಿಎಂ ಜೊತೆ ಚರ್ಚೆ ನಡೆಸಿ ಕಾಂಗ್ರೆಸ್‌ ನಾಯಕರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ದಿನೇಶ್‌ ಗುಂಡುರಾವ್‌ ಅವರು ಅಧ್ಯಕ್ಷರಾಗಿದ್ದ ಸಂದರ್ಭ ದೇಣಿಗೆ ನೀಡಿರಲಿಲ್ಲ. ಈಗ ಡಿಕೆಶಿ ಅವರು ಅಧ್ಯಕ್ಷರಾಗುತ್ತಿದ್ದಂತೆ ದಿಢೀರನೇ ಬಂದು ಬಿಟ್ಟಿದೆ. ಇದು ನಮಗೆ ಆಶ್ಚರ್ಯಕರವಾದ ಸಂಗತಿ. ಹಾಗಾಗಿ ಅವರು ಕೊಟ್ಟಿರುವ ಚೆಕ್‌ ಅನ್ನು ನಾವು ಸುರಕ್ಷಿತವಾಗಿ ನೋಡುತ್ತಿದ್ದೇವೆ. ನಾವು ಅವರ ಒಂದು ಕೋಟಿ ಚೆಕ್‌ ಅನ್ನು ತೆಗೆದುಕೊಂಡಿಲ್ಲ. ಈಗಾಗಲೇ ನಾವು ನೂರಾರು ಕೋಟಿ ಖರ್ಚು ಮಾಡಿದ್ದೇವೆ. ಆದರೆ, ದೇಶದಿಂದ ಕಾಂಗ್ರೆಸ್‌ ಪಡೆದುಕೊಂಡಿದ್ದೇ ಹೆಚ್ಚು. ನೀವು ಅರುವತ್ತು ವರ್ಷದಲ್ಲಿ ಎಷ್ಟು ಪಡೆದುಕೊಂಡಿದ್ದೀರಿ. ತೀರ್ಥ ನೀಡಿದಂತೆ ಈಗ ನೀಡಬೇಡಿ. ಕಾಂಗ್ರೆಸ್‌ ಪಕ್ಷಕ್ಕೆ 120 ವರ್ಷದ ಇತಿಹಾಸವಿದೆ. ಹಣ ಕೊಡುವುದಾದರೆ 120 ಕೋಟಿ ಹಣ ನೀಡಿ. ಅದು ಬಿಟ್ಟು ಹಣವನ್ನು ಪ್ರಚಾರಕ್ಕಾಗಿ ಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×