Breaking News

ರೈತರಿಂದ 35 ಸಾವಿರ ಕೆಜಿ ತರಕಾರಿ ಖರೀದಿಸಿ ಬಡವರಿಗೆ ಹಂಚಿದ ಕೃಷ್ಣ ಭೈರೇಗೌಡ

ಬೆಂಗಳೂರು: ದೇಶಾದ್ಯಂತ ಲಾಕ್ ಡೌನ್ ಆಗಿ ರೈತರು ಬೆಳೆದ ಬೆಲೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರ ನೆರವಿಗೆ ಧಾವಿಸಿದ್ದಾರೆ.

ಮಾಜಿ ಸಚಿವರು ರೈತರಿಂದ ೩೫ ಸಾವಿರ ಕೆಜಿ ತರಕಾರಿ ಖರೀದಿಸಿದ್ದು ತಮ್ಮ ಕ್ಷೇತ್ರದಲ್ಲಿನ ಕಡು ಬಡವರಿಗೆ ಉಚಿತವಾಗಿ ಹಂಚಿದ್ದಾರೆ.

ಶುಕ್ರವಾರ ಬೆಂಗಳೂರಿನ ಕೆಂಪಾಪುರ, ಭಾರತಿನಗರ, ಹುಣಸೆಮಾರನಹಳ್ಳಿ ಸೇರಿ ಹಲವು ಕಡೆಯಲ್ಲಿ ತರಕಾರಿ ಉಚಿತ ಹಂಚಿಕೆ ಮಾಡಲಾಗಿದೆ. ರೈತರಿಂದ ಕೆಂಪು ಮೂಲಂಗಿ, ಟೊಮ್ಯಾಟೋ, ಬದನೆಕಾಯಿ ಸೇರಿ ಹಲವು ವಿಧದ ತರಕಾರಿ ಖರೀದಿಸಿ ತಮ್ಮ ವಾಹನದಲ್ಲೇ ಸಾಗಾಟ ಮಾಡಿದ್ದಲ್ಲದೆ ಕಾರ್ಮಿಕರು, ಬಡವರಿಗೆ ಹಂಚಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×