Breaking News

‘ರಾಜ್ಯಾಧ್ಯಕ್ಷ ನಳಿನ್ ಉತ್ತಮ ಸಂಘಟಕ, ಪಕ್ಷ ಕಟ್ಟುವ ಶಕ್ತಿ, ಚೈತನ್ಯ ಇನ್ನಷ್ಟು ಕೊಡಲಿ’ – ಸಿಎಂ ಹಾರೈಕೆ

ಬೆಂಗಳೂರು : ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ನಿಟ್ಟಿನಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಶುಭ ಹಾರೈಸಿದ ಸಿಎಂ ಬಿಎಸ್‌ವೈ ಅವರು, ರಾಜ್ಯಾಧ್ಯಕ್ಷ ನಳಿನ್ ಉತ್ತಮ ಸಂಘಟಕ, ಪಕ್ಷ ಕಟ್ಟುವ ಶಕ್ತಿ, ಚೈತನ್ಯ ಇನ್ನಷ್ಟು ಕೊಡಲಿ ಎಂದಿದ್ದಾರೆ.

ವಿಡಿಯೋ ಮೂಲಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌‌.ಯಡಿಯೂರಪ್ಪ ಅವರು, ನಳಿನ್‌‌ ಕುಮಾರ್‌ ಅವರು ಪಕ್ಷದ ಯಶಸ್ಸಿಗೆ ಕಾರಣರಾಗಿದ್ದಾರೆ. ಅಲ್ಲದೇ, ಪಕ್ಷದ ಕಾರ್ಯಕರ್ತರು ಸೇರಿದಂತೆ ಮುಖಂಡರಲ್ಲಿ ಉತ್ಸಾಹ ಮೂಡಿಸುವ ಉತ್ತಮ ಕಾರ್ಯ ಮಾಡಿದ್ದಾರೆ. ಉತ್ತಮವಾದ ಸಂಘಟಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಶ್ರಮದಿಂದ ಕರ್ತವ್ಯ ವಹಿಸಿ ಪಕ್ಷ ಕಟ್ಟುವಂತಹ ಕೆಲಸ ಮಾಡಲು ದೇವರು ಅವರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ನಳಿನ್‌ ಅವರು ಆರ್‌‌ಎಸ್‌‌ಎಸ್‌ ಸಂಘಟನೆಯಲ್ಲಿ ಬೆಳೆದವರಾದ ಕಾರಣ ಸಂಘಟನೆಯನ್ನು ಹೇಗೆ ಬೆಳೆಸಬೇಕು ಎನ್ನುವ ವಿಚಾರ ಅವರಿಗೆ ತಿಳಿದಿದೆ. ಈ ಹಿನ್ನೆಲೆ, ಅವರು ಪಕ್ಷ ಹಾಗೂ ಸಂಘಟನೆಯಲ್ಲೂ ಸಫಲರಾಗಿದ್ದಾರೆ ಎನ್ನುವು ಸಂತಸದ ಸಂಗತಿ. ಪಕ್ಷದ ರಥವನ್ನು ಯಶಸ್ವಿಯಾಗಿ ಒಂದು ವರ್ಷದ ಕಾಲ ಮುನ್ನಡೆಸಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷ ಕಟ್ಟುವ ಚೈತನ್ಯ ನೀಡಲಿ ಎನ್ನುವುದು ನನ್ನ ಹಾರೈಕೆ ಎಂದು ತಿಳಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×