Breaking News

ಮಂಗಳೂರು: ಬಸ್‌ಪಾಸ್‌ ಕಾಲಾವಧಿ ವಿಸ್ತರಿಸುವಂತೆ ABVP ಆಗ್ರಹ

ಮಂಗಳೂರು : ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಯಾವುದೇ ಅಧಿಕ ಶುಲ್ಕ ವಿಧಿಸದೆ ಬಸ್‌ ಪಾಸ್‌ನ ಕಾಲಾವಧಿ ವಿಸ್ತರಿಸುವಂತೆ ಆಗ್ರಹಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.

ಈ ಬಗ್ಗೆ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ‘ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಬಸ್‌ ಪಾಸ್ ಕೊಡಬೇಕೆಂದು ಈ ಮೊದಲು ಕೂಡಾ ವಿದ್ಯಾರ್ಥಿ ಪರಿಷತ್ ಕೆಎಸ್‌ಆರ್‌ಟಿಸಿ ನಿಗಮದಿಂದ ಮನವಿಯನ್ನು ಮಾಡಿಕೊಂಡೇ ಬಂದಿದೆ.

ಕೊರೋನಾದ ಕಾರಣದಿಂದ ಮೇ ತಿಂಗಳಿನಲ್ಲಿ ಮುಗಿಯಬೇಕಿದ್ದ ಶೈಕ್ಷಣಿಕ ವರ್ಷ ಸಪ್ಟೆಂಬರ್‌ನ ಕೊನೆಯಲ್ಲಿ ಅಂತ್ಯವಾಗುತ್ತಿದೆ. ಹಾಗೆಯೇ ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಅಕ್ಟೋಬರ್‌ನಲ್ಲಿ ಮುಗಿಯುತ್ತದೆ. ಹೀಗಿರುವಾಗ 3 ತಿಂಗಳು ವಿದ್ಯಾರ್ಥಿಗಳು ಬಸ್‌ಪಾಸ್‌ ಇಲ್ಲದೆ ಬಸ್ಸಿನಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ ನಿನ್ನೆ ಒಂದು ನೋಟೀಸ್ ಬರುತ್ತೆ ಏನಂದ್ರೆ ಕೇವಲ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅಧಿಕ ಶುಲ್ಕ ಕಟ್ಟಿಸಿಕೊಂಡು 3 ತಿಂಗಳ ಕಾಲ ವಿಸ್ತರಣೆ ಮಾಡಬೇಕು ಅಂತ.

ಆದರೆ ವಿದ್ಯಾರ್ಥಿ ಪರಿಷತ್ ಈ ಸಂದರ್ಭ ಸಾರಿಗೆ ಸಚಿವರಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ ಯಾವುದೇ ಅಧಿಕ ಶುಲ್ಕ ಕಟ್ಟಿಸಿಕೊಳ್ಳದೆ ಈಗ ಇರುವ ಬಸ್‌ ಪಾಸ್‌ನ್ನು ಅವಧಿ ಮುಗಿಯುವವರೆಗೂ ನೀಡಬೇಕು.

ಇಲ್ಲವಾದಲ್ಲಿ ಮುಂದಿನ ದಿನ ವಿದ್ಯಾರ್ಥಿಗಳು ಉಗ್ರವಾದ ಹೋರಾಟಕ್ಕಿಳಿಯಬಹುದು’ ಎಂದು ಕಿಡಿಕಾರಿದರು.

Follow us on Social media

About the author