Breaking News

ಬೆಂಗಳೂರು : ‘ರಾಹುಲ್ ಗಾಂಧಿ ಸಾವರ್ಕರ್ ಪಾದದ ಧೂಳಿಗೂ ಸಮವಲ್ಲ’-ಸಿ.ಟಿ. ರವಿ ಕಿಡಿ

ಬೆಂಗಳೂರು : ರಾಹುಲ್ ಗಾಂಧಿಯವರಿಗೆ ಸಾವರ್ಕರ್ ಪಾದದ ಧೂಳಿಗೂ ಸಮವಾಗುವ ಯೋಗ್ಯತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ನಾನು ಸಾವರ್ಕರ್ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೋಸ್ಟರ್ ಹರಿದಾಡುತ್ತಿರುವ ಕುರಿತು ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಅಂಡಮಾನ್ ಜೈಲು ನೋಡಿದರೆ ರಾಹುಲ್‌ ಗಾಂಧಿಯವರ ಚಡ್ಡಿ, ಪ್ಯಾಂಟ್ ಒದ್ದೆಯಾಗಬಹುದು. ಅವರು ಮುಂದಿನ ಜನ್ಮದಲ್ಲೂ ಸಾವರ್ಕರ್‍ ಆಗುವುದು ಅಸಾಧ್ಯತ. ಮೊದಲು ಅವರು ಸಾರ್ವಜನಿವಾಗಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಭ್ರಷ್ಟಾಚಾರವನ್ನು ಮುಚ್ಚಿ ಹಾಕುವುದಕ್ಕಾಗಿ ಕಾಂಗ್ರೆಸ್‌ನವರು ಬೀದಿಗಿಳಿದು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾದಲ್ಲಿ ಸತ್ಯ ಹೊರಬರಲಿದೆ. ಆ ಪಕ್ಷವು ಹಗರಣಗಳ ಸರ್ದಾರವಾಗಿದೆ. ಪಾದದಿಂದ ತಲೆಯವರೆಗೂ ಹಗರಣಗಳನ್ನೇ ಹೊದ್ದು ಮಲಗಿದ ಪಕ್ಷವದು ಎಂದು ಕಾಂಗ್ರೆಸ್‌ ಪ್ರತಿಭಟನೆ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಭ್ರಷ್ಟಾಚಾರಿಗಳಿಗೆ ಭ್ರಷ್ಟಾಚಾರಿಗಳೇ ಬೆಂಬಲ ನೀಡಿ ಪ್ರತಿಭಟನೆಗಿಳಿದಿರುವುದು ಹಾಸ್ಯಾಸ್ಪದ. ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಂಡು ಗಾಂಧಿ ಕುಟುಂಬವನ್ನು ಕಾಪಾಡುವ ತಂತ್ರ ನಡೆಯುತ್ತಿದೆ. ಮೇವಿನೊಂದಿಗೆ ಪೇಪರ್ ತಿಂದವರು ಕೂಡಾ ಜೈಲಿಗೆ ಹೋಗುವುದು ನಿಶ್ಚಿತ ಎಂದು ಸಿ.ಟಿ. ರವಿ ತಿಳಿಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×