Breaking News

ನೂರಾರು ಜನರ ಮಧ್ಯೆ ಮೆರವಣಿಗೆ, ಸೇಬಿನ ಹಾರ – ನಿಯಮ ಉಲ್ಲಂಘಿಸಿದ ಶ್ರೀರಾಮುಲು

ಚಿತ್ರದುರ್ಗ: ಕೊರೊನಾ ಮಹಾಮಾರಿ ರಾಜ್ಯದಲ್ಲಿ ಸ್ಫೋಟಿಸಿರುವ ಬೆನ್ನಲ್ಲೇ ಆರೋಗ್ಯ ಸಚಿವ ಶ್ರೀರಾಮುಲು ಸಾಮಾಜಿಕ ಅಂತರ ಮರೆತು ಬೇಜವಾಬ್ದಾರಿತನ ಮೆರೆದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಅಷ್ಟಕ್ಕೂ ಆಗಿದ್ದು ಏನಂದ್ರೆ ಪರಶುರಾಂಪುರಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನೀಡಿದ್ದರು, ಈ ವೇಳೆ ಅವರಿಗೆ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಗಿದೆ. ವೇದಾವತಿ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀರಾಮುಲು ಅವರನ್ನು ಎತ್ತಿನ ಗಾಡಿಯಲ್ಲಿ ಕರೆದೊಯ್ಯುವ ಮೂಲಕ ಅದ್ಧೂರಿ ಸ್ವಾಗತ ಕೋರಲಾಗಿದೆ. ಈ ವೇಳೆ ಮೆರವಣಿಗೆಯಲ್ಲಿ ನೂರಾರು ಜನರು ಸಾಮಾಜಿಕ ಅಂತರದ ಪರಿಜ್ಞಾನವೂ ಇಲ್ಲದೇ ಪಾಲ್ಗೊಂಡಿದ್ದಾರೆ. ಮಾತ್ರವಲ್ಲ ಆರೋಗ್ಯ ಸಚಿವರೊಂದಿಗೆ ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸಂಸದ ಎ.ನಾರಾಯಣಸ್ವಾಮಿ ಕೂಡ ಈ ಮೆರವಣಿಗೆಗೆ ಸಾಕ್ಷಿಯಾಗಿದ್ದಾರೆ.

ಮಾಸ್ಕ್ ಧರಿಸದೆ ಮೆರವಣಿಗೆ ಹೊರಟ ಆರೋಗ್ಯ ಸಚಿವ, ಶಾಸಕ, ಸಂಸದರಿಗೆ ಜೆಸಿಬಿ ಮೂಲಕ ಸೇಬಿನ ಹಾರ ಹಾಕಿ ಹೂವಿನ ಮಳೆ ಸುರಿಸಲಾಗಿದೆ. ಸಾಮಾಜಿಕ ಅಂತರ ಮರೆತು, ಮಾಸ್ಕ್‌ ಕೂಡ ಧರಿಸದೇ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ  ಶ್ರೀರಾಮುಲು ಕೂಡ ಜನರೆಡೆಗೆ ಕೈ ಬೀಸುತ್ತಾ ಇದ್ದಿದ್ದು ಪ್ರಧಾನಿ ಮೋದಿಯವರ ಕರೆಗೂ ಕ್ಯಾರೇ ಅನ್ನದೇ ಇರುವುದಕ್ಕೆ ಸಾಕ್ಷಿಯೆನ್ನುವಂತಾಗಿತ್ತು.

ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೊನಾ ವಿರುದ್ಧ ಹೋರಾಟದಲ್ಲಿ ನಾವು ಗೆಲ್ಲಲು ಎಲ್ಲರೂ ಮಾಸ್ಕ್ ಹಾಕಿಕೊಳ್ಳಿ, ಸ್ಯಾನಿಟೈಸರ್​​ ಬಳಸ್ತಾ ಇರಿ.. ಅಷ್ಟೇ ಅಲ್ಲ ದೋ ಗಜ್​ (ಎರಡು ಅಡಿ) ದೂರ ಮೆಂಟೈನ್​ ಮಾಡಿ ಅಂತಾ ಪದೇ ಪದೆ ಮನವಿ ಮಾಡಿಕೊಳ್ತಾ ಇರ್ತಾರೆ. ಆದರೆ, ಇಂದು ಅವರದ್ದೇ ಪಕ್ಷದ ಅದ್ರಲ್ಲೂ ಆರೋಗ್ಯ ಸಚಿವರೇ ಈ ಮನವಿಯನ್ನು ಗಾಳಿಗೆ ತೂರಿರೋದು ವಿಪಱಸವೇ ಸರಿ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×