Breaking News

‘ನೀವು ಓಲೈಸಿದ ಎಸ್‌‌ಡಿಪಿಐ ಈಗ ನಿಮಗೇ ಮುಳ್ಳಾಗಿದೆ’ – ಸಿದ್ದರಾಮಯ್ಯಗೆ ನಳಿನ್‍‌‌ ತಿರುಗೇಟು

ಬೆಂಗಳೂರು : ನೀವು ಓಲೈಸಿದ ಎಸ್‌‌ಡಿಪಿಐ ಈಗ ನಿಮಗೇ ಮುಳ್ಳಾಗಿರುವುದು ವಿಷಾದಕರ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಮಾನ್ಯ ಸಿದ್ದರಾಮಯ್ಯನವರೇ, ನೀವು ಓಲೈಸಿದ ಎಸ್‌‌ಡಿಪಿಐ ಈಗ ನಿಮಗೇ ಮುಳ್ಳಾಗಿರುವುದು ವಿಷಾದಕರ. ಅದರಲ್ಲಿಯೂ, ದಲಿತರ ಪರವಾಗಿ ನಿಲ್ಲದೆ ನೀವು ನಮ್ಮ ನೆಲದ ಕಾನೂನನ್ನು ಗೌರವಿಸದೇ ಇರುವವರ ಪರ ನಿಲ್ಲುತ್ತಿರುವುದನ್ನು ನೋಡಿದರೆ ನಿಮ್ಮ ‘ಅಹಿಂದ’ ಸಿದ್ಧಾಂತ ದಲಿತ-ವಿರೋಧಿ ಎಂಬುದು ಸಾಬೀತಾಗುತ್ತಿದೆ ಎಂದಿದ್ದಾರೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರೂ ಕೂಡಾ ಟ್ವೀಟ್‌ ಮಾಡಿದ್ದು, ನಿಮ್ಮ ಶಾಸಕರ ಮನೆಗೆ ಬೆಂಕಿ ಬಿದ್ದಾಗಲೂ ನಿಮ್ಮ‌‌ ಪಕ್ಷದವರು ಸಹಾಯವಾಗಲಿ ಅಥವಾ ಮೂರ್ತಿಯವರ ಪರವಾಗಿ ದೂರು ಸಲ್ಲಿಸದೇ ಹೋದಾಗ ನೀವು ಸಾಮಾನ್ಯ ದಲಿತರ ಪರ ಹೋರಾಡುವುದು ಅಥವಾ ನಿಮ್ಮ‌ ಪಕ್ಷದ ದಲಿತ ಕಾರ್ಯಕರ್ತರ ರಕ್ಷಣೆ ನೀಡುವುದು ಸಾಧ್ಯವೇ? ಎಂದು ಕೇಳಿದ್ದಾರೆ.

ಬಿಎಲ್‌ ಸಂತೋಷ್‌ ಅವರು ‘ಹಿಂದುತ್ವ’ದ ಜಪ ನಿಲ್ಲಿಸಿ ‘ದಲಿತ’ ಜಪ ಶುರು ಮಾಡಿದ್ದಾರೆ. ‘ಹಿಂದು-ಒಂದು’ ಎಂದು ಭಜನೆ ಮಾಡ್ತೀರಿ, ಜಾತಿ ಮೂಲದ ತಾರತಮ್ಯ,ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ. ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ ಕರೆಯೋಣವೇ? ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×