Breaking News

ಕರ್ನಾಟಕದ ಸರಕು ವಾಹನಕ್ಕೂ ಕಾಸರಗೋಡು ಪ್ರವೇಶವಿಲ್ಲ, – ಡಿ.ಸಿ ಸಜಿತ್ ಬಾಬು

ಕಾಸರಗೋಡು : ಕರ್ನಾಟಕದಿಂದ ತರಕಾರಿ, ಹಣ್ಣು ಹಂಪಲು ಮತ್ತು ಮೀನು ಹೇರಿಕೊಂಡು ಬರುವ ವಾಹನಗಳಲ್ಲಿನ ಸರಕುಗಳನ್ನು ಗಡಿ ಪ್ರದೇಶಗಳಲ್ಲಿ ಸಂಬಂಧಪಟ್ಟ ಇತರ ವಾಹನಗಳಿಗೆ ಹಸ್ತಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಡಾ . ಸಜಿತ್ ಬಾಬು ತಿಳಿಸಿದ್ದಾರೆ.

ಅಲ್ಲದೆ ಆರೋಗ್ಯ ಇಲಾಖೆಯ ನಿಬಂಧನೆಗಳನ್ನು ಪಾಲಿಸಬೇಕು ಮಾಸ್ಕ್ , ಗ್ಲೌಸ್, ಸಾನಿಟೈಸರ್ ಬಳಕೆ ಕಡ್ಡಾಯವಾಗಿ ಬಳಸಿ, ನಿಬಂಧನೆ ಪಾಲಿಸಿ ಸರಕನ್ನು ಹಸ್ತಾಂತರಿಸಬೇಕು . ಆದೇಶ ಉಲ್ಲಂಘಿಸಿದ್ದಲ್ಲಿ ಮೊಕದ್ದಮೆ ದಾಖಲಿಸಿ , ವಾಹನ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ

ಕರ್ನಾಟಕದಿಂದ ಸರಕು ವಾಹನಗಳಲ್ಲಿ ಬರುವವರಿಗೆ ಕಾಸರಗೋಡುಜಿಲ್ಲೆಗೆ ಪ್ರವೇಶ ಇಲ್ಲ . ಕರ್ನಾಟಕದಿಂದ ವಾಹನಗಳಲ್ಲಿ ಬರುವ ಸರಕನ್ನು ಗಡಿಯಲ್ಲಿ ಕಾಸರಗೋಡಿನ ವಾಹನಗಳಿಗೆ ತುಂಬಿಸಬೇಕು . ಸರಕು ತರುವ ಕಾಸರಗೋಡಿನ ವಾಹನ ಚಾಲಕ , ಸಿಬಂದಿಗಳು ವಾರಕ್ಕೊಮ್ಮೆ ಸಮೀಪದ ಪ್ರಾಥಮಿಕ ಆರೋಗ್ಯ ಕೇದ್ರದಲ್ಲಿ ತಪಾಸಣೆಗೊಳಗಾಗಿ ಕೋವಿಡ್ ಲಕ್ಷಣ ಹೊಂದಿಲ್ಲ ಎಂದು ಸರ್ಟಿಫಿಕೇಟ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×