Breaking News

ಮತ್ತೆ ಮತ್ತೆ ಕುಸಿಯುತ್ತಿದೆ ಚಾರ್ಮಾಡಿ

ಬೆಳ್ತಂಗಡಿ: ಚಾರ್ಮಾಡಿ ಘಾಟ್ ರಸ್ತೆಯ 3, 4, 7 ನೇ ತಿರುವಿನಲ್ಲಿ ಗುಡ್ಡ ಕುಸಿಯುತ್ತಿದ್ದು, ಮರಗಳು ಕೂಡಾ ಧರಾಶಾಯಿಯಾಗಿವೆ. ಮೂರನೇ ತಿರುವಿನಲ್ಲಿ ದೊಡ್ಡ ಬಂಡೆ ಕುಸಿಯುವ ಹಂತದಲ್ಲಿದ್ದು, ಸವಾರರು ಭೀತಿಗೊಳಗಾಗಿದ್ದಾರೆ. ನೀರು ಹರಿಯಲು ಜಿಸಿಬಿಯಿಂದ ಮಣ್ಣು ತೆರವು ಕಾರ್ಯ‌ ಭರದಿಂದ ಸಾಗಿದೆ.
ಅರಣ್ಯ ಇಲಾಖೆ ಸಿಬಂದಿ, 5 ಮಂದಿ ಪ್ರಕೃತಿ ವಿಕೋಪ ರಕ್ಷಣಾ ತಂಡ, ಬೆಳ್ತಂಗಡಿ, ಧರ್ಮಸ್ಥಳ ಠಾಣೆ ಪೊಲೀಸ್ ಸಿಬಂದಿ, ಆರೋಗ್ಯ, ಮೆಸ್ಕಾಂ ಇಲಾಖೆ ಸಿಬಂದಿ ಸ್ಥಳದಲ್ಲಿ ಮೆಕ್ಕಾಂ ಹೂಡಿದ್ದಾರೆ.
ನೇತ್ರಾವತಿ ನದಿಯು ಮೈದುಂಬಿ ಹರಿಯುತ್ತಿದ್ದು, ಧರ್ಮಸ್ಥಳ ಸ್ನಾನಘಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

Follow us on Social media

About the author