Breaking News

ನೇತ್ರಾವತಿಗೆ ಹಾರಿದ ಯುವಕ ಮೀನುಗಾರರಿಂದ ರಕ್ಷಣೆ

ಮಂಗಳೂರು: ಚಿಕ್ಕಮಗಳೂರಿನ ಕಡೂರು ನಿವಾಸಿ ಗಿರೀಶ್ ಎಂಬಾತ ಭಾನುವಾರ ಸಾಯಂಕಾಲ ತೊಕ್ಕೊಟ್ಟು ಸಮೀಪದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯ ಮೀನುಗಾರರು ಆತನನ್ನು ರಕ್ಷಿಸಿದ್ದಾರೆ.
ಕೆಟಿಎಂ ಬೈಕ್ ನಲ್ಲಿ ಬಂದು ನದಿಗೆ ಹಾರಿದ್ದನ್ನು ಕಂಡ ಅಲ್ಲೇ ಸಮೀಪದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರು ಸ್ಥಳಕ್ಕೆ ತೆರಳಿ ಗಿರೀಶ್ ನನ್ನು ರಕ್ಷಿಸಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಕಂಕನಾಡಿ ನಗರ ಮತ್ತು ಉಳ್ಳಾಲ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Follow us on Social media

About the author