Breaking News

ಕೊರೋನಾ ಮೂರನೇ ಅಲೆಯಲ್ಲಿ ನೀವು ಉಳಿತಿರೋ ಇಲ್ಲವೋ, ನಾನಂತೂ ಬದುಕಬೇಕು: ಮತ್ತೆ ‘ಕತ್ತಿ’ ವರಸೆ

ಬಾಗಲಕೋಟೆ: ಕೊರೋನಾ ಮೂರನೇ ಅಲೆ ಬರುತ್ತೆ, ನಾವು, ನೀವು ಉಳಿಯಬೇಕು. ನೀವು ಉಳಿಯುತ್ತೀರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ರಬಕವಿ- ಬನಹಟ್ಟಿನಗರದಲ್ಲಿ ಶನಿವಾರ ನಡೆದ ಸರ್ಕಾರಿ ಹಾಗೂ ಖಾಸಗಿ ವೈದ್ಯರ ಸಭೆಯಲ್ಲಿ ಸಚಿವ ಕತ್ತಿ ಮಾತನಾಡಿದರು. ಮೂರನೇ ಅಲೆಗೆ ಆಕ್ಸಿಜನ್ ಸಾಂದ್ರಕ ಯಂತ್ರಗಳನ್ನು ಸರ್ಕಾರ ಹೆಚ್ಚು ನೀಡಬೇಕು ಎಂದು ವೈದ್ಯರು ಒತ್ತಾಯಿಸಿದರು. 

ಈ ವೇಳೆ ಪ್ರತಿಕ್ರಿಯಿಸಿದ ಸಚಿವರು ಮೂರನೇ ಅಲೆ  ಬಂದಾಗ ನೋಡೋಣ ಎಂದರು, ಇದಕ್ಕೆ ಉತ್ತರಿಸಿದ ವೈದ್ಯರು ನಾವು ಉಳಿದರೇ ನೋಡೋಣ ಎಂದಾಗ, ನೀವು ಉಳಿಯಿತ್ತಿರೋ ಇಲ್ಲವೋ ನಾನಂತು ಉಳಿಯಬೇಕು ಎಂದು ಉಮೇಶ್ ಕತ್ತಿ ಹೇಳಿ ವಿವಾದಕ್ಕೆ ಸಿಲುಕಿದ್ದಾರೆ.

Follow us on Social media

About the author