Breaking News

ಉಡುಪಿ : ಕಾಂಗ್ರೆಸ್ ನಾಯಕಿ ಅಂಜುಂ ಎಡವಟ್ಟು-ಬುಲೆಟ್ ಮೇಲೆ ಉಲ್ಟಾ ಧ್ವಜ ಹಾರಾಟ

ಉಡುಪಿ : ಉಡುಪಿಯಲ್ಲಿ ನಡೆದ ತಿರಂಗ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಂ ಅವರು ತಮ್ಮ ಬೈಕಿನಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿಕೊಂಡು ಹೋಗಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಸುರಯ್ಯ ಅಂಜುಂ ಎಡವಟ್ಟು ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಮಂದಿ ಟೀಕೆ ಮಾಡಿದ್ದಾರೆ.ಈ ರ್ಯಾಲಿಯನ್ನು ಆಯೋಜನೆ ಮಾಡಿದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರಿಗೂ ಈ ಎಡವಟ್ಟು ಗಮನಕ್ಕೆ ಬಾರದಿರುವುದು ವಿಷಾದನೀಯವಾಗಿದೆ.

Follow us on Social media

About the author