Breaking News

ಪುಷ್ಕರಿಣಿಯಲ್ಲಿ ಮುಳುಗಿ ಯುವಕ ಮೃತ್ಯು

ಕುಂದಾಪುರ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಪುಷ್ಕರಣಿಯಲ್ಲಿ ನಾಗರಪಂಚಮಿಯ ದಿನವಾದ ಸೋಮವಾರ ಈಜಲು ಹೋದ ಇಬ್ಬರು ಯುವಕರ ಪೈಕಿ ಕಾರ್ಕಡ ನಿವಾಸಿ ವಿನೋದ್ ಗಾಣಿಗ(28) ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರಿಗೂ ಈಜು ಗೊತ್ತಿದ್ದು, ಮಳೆ ಕಾರಣ ಕೆರೆಯಲ್ಲಿ ನೀರು ತುಂಬಿದ್ದರಿಂದ ವಿನೋದ್ ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಮೃತದೇಹವನ್ನು ಮೇಲೆತ್ತಿದ್ದಾರೆ. ಮೃತ ವಿನೋದ್ ದೇಹದಾರ್ಡ್ಯಪಟುವಾಗಿದ್ದರು. ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×