Breaking News

ಏ.14ರವರೆಗೆ ರಾಜ್ಯದಲ್ಲಿ ಮದ್ಯಮಾರಾಟ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವುದರಿಂಧ ಏಪ್ರಿಲ್ 14ರವರೆಗೆ ರಾಜ್ಯದಲ್ಲಿ ಮದ್ಯಮಾರಾಟ ಮಾಡಲು ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಲಾಕ್‌ಡೌನ್ ಮುಗಿಯುವವರೆಗೂ ಮದ್ಯಪ್ರಿಯರು ಕಾಯಲೇಬೇಕಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯಕ್ಕಾಗಿ ದೆಹಲಿಗೆ ಯಾರು ಹೋಗಿದ್ದಾರೋ ಅವರೇ ಮುಂದೆ ಬಂದರೆ ಒಳ್ಳೆಯದು. ನಾವು ನಿಮ್ಮನ್ನು ಹುಡುಕುವುದು ತಪ್ಪಲಿದೆ. ಏಪ್ರಿಲ್ 14ವರೆಗೆ ಮದ್ಯದಂಗಡಿ ಬಂದ್ ಇರಲಿದೆ. ಯಾರಿಗೆಲ್ಲ ಎಣ್ಣೆ ಕುಡಿಯಬೇಕೆಂಬುದಿದೆಯೋ ಅವರು ಅಲ್ಲಿಯವರೆಗೆ ಕಾಯಲೇಬೇಕು ಎಂದು ನಗೆಚಟಾಕಿ ಹಾರಿಸಿದರು‌.

Follow us on Social media

About the author