Breaking News

ಬಂಟ್ವಾಳ : ಆಟೋಗೆ ಅಡ್ಡ ಬಂದ ಮುಂಗುಸಿ – ರಿಕ್ಷಾ ಪಲ್ಟಿ, ಚಾಲಕನಿಗೆ ಗಾಯ

ಬಂಟ್ವಾಳ: ಅಡ್ಡ ಬಂದ ಮುಂಗುಸಿಯ ಪ್ರಾಣ ಉಳಿಸಲು ಹೋಗಿ ಆಟೋ ರಿಕ್ಷಾ ಪಲ್ಟಿ ಹೊಡೆದು ಚಾಲಕ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೊಡಂಗಾಯಿ ಎಂಬಲ್ಲಿ ನಡೆದಿದೆ.

ಗಾಯಾಳುವನ್ನು ಮಂಗಲಪದವು ನಿವಾಸಿ ಇಸ್ಮಾಯಿಲ್ (53) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ವಿಟ್ಲದಿಂದ ಸಾಲೆತ್ತೂರು ಕಡೆಗೆ ಪ್ರಯಾಣಿಕರನ್ನು ಬಿಟ್ಟು ಮತ್ತೆ ವಿಟ್ಲಕ್ಕೆ ಹಿಂತಿರುಗುತ್ತಿದ್ದಾಗ ಕೊಡಂಗಾಯಿ ಸಮೀಪ ಮುಂಗುಸಿಯೊಂದು ಅಡ್ಡಬಂದಿದೆ.

ವೇಗವಾಗಿ ಚಲಿಸುತ್ತಿದ್ದ ರಿಕ್ಷಾ ಚಾಲಕ ಮುಂಗುಸಿಯ ಪ್ರಾಣ ಉಳಿಸಲು ಹಠಾತ್ ಬ್ರೇಕ್ ಹಾಕಿದ್ದಾರೆ. ತಕ್ಷಣ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಅಪ್ಪಳಿಸಿದೆ.

ಘಟನೆಯಲ್ಲಿ ಚಾಲಕ ಇಸ್ಮಾಯಿಲ್ ಗಾಯಗೊಂಡಿದ್ದು, ಆಟೋ ಸಹಜಖಂಗೊಂಡಿದೆ. ಸ್ಥಳೀಯರು ಗಾಯಾಳುವನ್ನು ವಿಟ್ಲದ ಆಸ್ಪತ್ರೆಗೆ ದಾಖಲಿಸಿದ್ದಾರೆ.

Follow us on Social media

About the author