Breaking News

ಹಿಂದೂ ಭಾವನೆಗಳಿಗೆ ಧಕ್ಕೆ: ನಟಿ ಅಲಿಯಾ ಭಟ್, ಮಹೇಶ್ ಭಟ್ ಮುಖೇಶ್ ಭಟ್ ವಿರುದ್ಧ ದೂರು ದಾಖಲು

ಮುಜಾಫುರಾಪುರ್: ಸಡಕ್-2 ಸಿನಿಮಾ ಪೋಸ್ಟರ್ ನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ, ನಟಿ ಅಲಿಯಾ ಭಟ್, ನಿರ್ಮಾಪಕ ಮಹೇಶ್ ಭಟ್ ಮತ್ತು ಮುಖೇಶ್ ಭಟ್ ಅವರ ವಿರುದ್ಧ ದೂರು ದಾಖಲಾಗಿದೆ.

ಸಿಕಂದರಾಪುರ ನಿವಾಸಿ ಅಚಾರ್ಯ ಕಿಶೋರ್ ಪರಾಶರ್ ಎಂಬುವರು ತಮ್ಮ ವಕೀಲ ಸೋನು ಕುಮಾರ ಮೂಲಕ ದೂರು ದಾಖಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಮುಖ್ಯ ನ್ಯಾಯಾಧೀಶ  ಮುಂದಿನ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿದ್ದಾರೆ. ಸಿನಿಮಾ ಪೋಸ್ಟರ್ ನಲ್ಲಿ ಕೈಲಾಸ ಮಾನಸ ಸರೋವರ ಚಿತ್ರಗಳನ್ನು ಬಳಸಿಕೊಂಡಿರುವುದರ ಸಂಬಂಧ ದೂರು ದಾಖಲಿಸಿದ್ದಾರೆ. ಜೂನ್‌ 29ರಂದು ‘ಸಡಕ್-2’ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ನಟಿಯರ ಹೆಸರನ್ನು ಬಹಿರಂಗ ಮಾಡಿದ್ದಾರೆ. 

Follow us on Social media

About the author