Breaking News

ರಾಮ ಮಂದಿರ ಶಿಲಾನ್ಯಾಸ – ನಿಶಾನ್‌ ಪೂಜೆ ಮುಂದೂಡಿಕೆ

ಅಯೋಧ್ಯೆ : ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ನಿಶಾನ್‌ ಪೂಜೆ ಮಂಗಳವಾರಕ್ಕೆ ಮುಂದೂಡಲ್ಪಟ್ಟಿರುವುದಾಗಿ ರಾಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌‌ನ ಸದಸ್ಯ ಡಾ. ಅನಿಲ್‌‌ ಮಿಶ್ರಾ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಶ್ರೀರಾಮನಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯ ಆರಂಭವಾಗುವ ಮುನ್ನ ಹನುಮಂತನಿಗೆ ನಿಶಾನ್‌‌‌ ಪೂಜೆಯಾಗಬೇಕು ಎನ್ನುವುದು ನಂಬಿಕೆ. ಈ ನಿಟ್ಟಿನಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯದಲ್ಲಿ ನಿಶಾನ್‌‌‌‌ ಪೂಜೆ ಮುಖ್ಯ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ಅವರು ಕೊರೊನಾಗೆ ಭಾನುವಾರ ಸಾವನ್ನಪ್ಪಿದ್ದು. ಈ ಕಾರಣದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌‌‌‌ ಅವರು ಅಯೋಧ್ಯೆಗೆ ಭೇಟಿ ನೀಡುವುದು ಮುಂದೂಡಲಾಗಿತ್ತು.

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರ ಭೇಟಿ ಮುಂದೂಡಿಕೆಯಾದ ಕಾರಣ ಸೋಮವಾರ ನಡೆಯಬೇಕಿದ್ದ ನಿಶಾನ್‌ ಪೂಜೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ಅನಿಲ್‌‌ ಮಿಶ್ರಾ ಹೇಳಿದ್ದಾರೆ.

Follow us on Social media

About the author