Breaking News

ಬೆಳ್ತಂಗಡಿ : 28 ವರ್ಷದ ಯುವಕ ನೇಣಿಗೆ ಶರಣು

ಬೆಳ್ತಂಗಡಿ : ತಾಲೂಕಿನ ಮಿತ್ತಬಾಗಿಲು ಗ್ರಾಮದ ಬಿರ್ಮನೊಟ್ಟು ಎಂಬಲ್ಲಿ ನ.2ರಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

  • ಬಿರ್ಮನೊಟ್ಟು ಮನೆ ನಿವಾಸಿ ವಸಂತಗೌಡ ಎಂಬವರ ಪುತ್ರ ದಿನೇಶ್ ಗೌಡ(28) ನೇಣು ಬಿಗಿದುಕೊಂಡ ಯುವಕ.ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟ ಹೊಂದಿದ್ದ ಅವರ ಈ ಚಟವನ್ನು ಬಿಡಿಸಲು ಮನೆಯವರು ಪ್ರಯತ್ನಿಸುತ್ತಿದ್ದು, ಇದೇ ಕಾರಣಕ್ಕೆ ಮನನೊಂದು ದಿನೇಶ್ ಗೌಡ ಮನೆ ಸಮೀಪದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ಮೃತ ಯುವಕನ ಪೋಷಕರು ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media

About the author