Breaking News

ಬಂಟ್ವಾಳ: ಮುಂದಿನ ವರ್ಷವೇ ಶಾಲೆ ಆರಂಭಿಸಿ – ಸರ್ಕಾರಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಮನವಿ

ಬಂಟ್ವಾಳ: ಕೊರೊನಾ ಸಂದಿಗ್ದತೆಯ ಕಾಲಘಟ್ಟದಲ್ಲಿ ತರಾತುರಿಯಲ್ಲಿ ಶಾಲೆ ಪ್ರಾರಂಭಿಸುವ ಬದಲು ಮುಂದಿನ ವರ್ಷ ಶಾಲೆ ಆರಂಭಿಸಿ ಎಂದು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ|ಪ್ರಭಾಕರ್ ಭಟ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಾಂಕ್ರಮಿಕ ರೋಗ ಕೊರೊನಾದ ಹಾವಳಿ ಹೆಚ್ಚಿರುವ ಈ ಸಂದರ್ಭ ಶಾಲೆ ಪ್ರಾರಂಭ ಮಾಡುವುದು ಸಮಂಜಸವಲ್ಲ. ಹಾಗಾಗಿ ಮುಂದಿನ ವರ್ಷವೇ ಶಾಲೆ ಪ್ರಾರಂಭಿಸಿ ಎಂದು ಅವರು ಹೇಳಿದ್ದಾರೆ. ಶಾಲಾ ಪ್ರಾರಂಭದ ಕುರಿತು ಪೋಷಕರ ಸಭೆ ಕರೆದಾಗಲೂ ಈ ವರ್ಷ ಶಾಲೆ ಪ್ರಾರಂಭ ಬೇಡ ಎನ್ನುವ ಅಭಿಪ್ರಾಯ ಮಕ್ಕಳ ಪೋಷಕರಿಂದ ಕೇಳಿಬಂದಿತ್ತು ಎಂದು ಹೇಳಿದ್ದಾರೆ.

ಇದರೊಂದಿಗೆ ಶಾಲಾ ಶುಲ್ಕದ ನೆಪದಲ್ಲಿ ಶಾಲಾ ಮತ್ತು ಕಾಲೇಜುಗಳಿಂದ ವಿದ್ಯಾರ್ಥಿಗಳ ಪೋಷಕರ ಸುಲಿಗೆ ಮಾಡುತ್ತಿರುವುದು ಅಮಾನವೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow us on Social media

About the author