Breaking News

ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಳ ಸಾಧ್ಯತೆ

ಬಂಟ್ವಾಳ: ನಿರಂತರ ಮಳೆ ಸುರಿಯುತ್ತಿರುವುದರಿಂದ ಈ ವ್ಯಾಪ್ತಿಯ ಹೊಳೆ, ತೊರೆಗಳೆಲ್ಲ ತುಂಬಿ ಹರಿಯುತ್ತಿವೆ. ಇದರಿಂದ ಕರಾವಳಿಯ ಜೀವನದಿ ನೇತ್ರಾವತಿ ಹರಿವಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಕರಾವಳಿಗೆ ಮಾನ್ಸೂನ್ ಮಳೆ ಆರಂಭದ ೪-೫ ದಿನ ಮೊದಲು ಪಶ್ವಿಮ ಘಟ್ಟದ ಗುಡ್ಡಗಾಡು ಆರಣ್ಯ ಪ್ರದೇಶಗಳಲ್ಲಿ ೬೦ ಮಿ.ಮೀ. ಮಳೆಯಾಗುವುದು ರೂಢಿ. ಆದರೆ ಈಬಾರಿ ಮಾನ್ಸೂನ್ ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಇದರಿಂದ ಘಾಟಿ ಪ್ರದೇಶದ ಜಲಮೂಲಗಳಲ್ಲಿ ನೀರು ಹರಿಯದೆ ನೇತ್ರಾವತಿ ನದಿಯೂ ತುಂಬಿ ಹರಿದಿಲ್ಲ.

Follow us on Social media

About the author