Breaking News

ಉಡುಪಿ : ಕಟಪಾಡಿಯಲ್ಲಿ ಸರಣಿ ಅಪಘಾತ ಅಂಗಡಿಗೆ ನುಗ್ಗಿದ ಕಾರು- ಇಬ್ಬರಿಗೆ ಗಾಯ

ಉಡುಪಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸರ್ವಿಸ್ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರು‌ ಮತ್ತು ಸ್ಕೂಟರಿಗೆ ಡಿಕ್ಕಿಹೊಡೆದು ಚಿಕನ್ ಟಿಕ್ಕಾ ಅಂಗಡಿಗೆ ನುಗ್ಗಿ ಸರಣಿ ಅಪಘಾತ ನಡೆದ ಘಟನೆ ಕಟಪಾಡಿ ಪೇಟೆಯಲ್ಲಿ ಗುರುವಾರ ಸಂಜೆ ನಡೆದಿದೆ.ಬಂಟಕಲ್ಲು ಬಿಸಿ ರೋಡ್ ಉದ್ಯಮಿ ಸಿರಿಲ್ ಕ್ವಾಡ್ರಸ್ ಎಂಬವರು ಚಲಾಯಿಸುತ್ತಿದ್ದ ಮಹೀಂದ್ರ ಎಕ್ಸ್ ಯು ವಿ ಕಾರು ಚಾಲಕ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯ ಬದಿಯಲ್ಲಿ‌ ನಿಲ್ಲಿಸಿದ್ದ ಜೆನ್ ಕಾರು ಮತ್ತು ಸ್ಕೂಟರಿಗೆ ಡಿಕ್ಕಿಹೊಡೆದು ಸಮೀಪದ ಚಿಕನ್ ಟಿಕ್ಕಾ ಅಂಗಡಿಗೆ ನುಗ್ಗಿದೆ.

ಘಟನೆಯಲ್ಲಿ ಜೆನ್ ಕಾರು ಪೂರ್ಣ ನುಜ್ಜುಗುಜ್ಜಾಗಿದ್ದು ಸ್ಕೂಟರ್ ಮತ್ತು ಮಹೀಂದ್ರ ಕಾರು ಜಖಂಗೊಂಡಿದೆ.

ಅಂಗಡಿಯೊಳಗಿದ್ದ ಸಿಬಂದಿ ಹಾಗೂ ಗ್ರಾಹಕ ಭುವನೇಶ್ ಅದೃಷ್ಡವಶಾತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಅಂಗಡಿಯ‌ ಮುಂಭಾಗ ಕಿತ್ತುಹೋಗಿದ್ದು ಅಂಗಡಿಯೊಳಗೆ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರ್ ಮತ್ತು ಬಟ್ಟಿ ಇದ್ದರೂ ಹೆಚ್ಚಿನ ಅಪಾಯ ಸಂಭವಿಸಿಲ್ಲ.ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

Follow us on Social media

About the author