Breaking News

ದಕ್ಷಿಣ ಕನ್ನಡ; ಏ.15ರಿಂದ ಮೀನುಗಾರಿಕೆಗೆ ಅನುಮತಿ

ಮಂಗಳೂರು : ಲಾಕ್ ಡೌನ್ ಅವಧಿಯಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ ಬೆನ್ನಲ್ಲೇ ಏಪ್ರಿಲ್ 15ರಿಂದ ಕರಾವಳಿ ಜಿಲ್ಲೆಗಳ 14 ಸಾವಿರ ಸಾಂಪ್ರದಾಯಿಕ ಮೀನುಗಾರರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಠಿಣವಾಗಿರುವುದರಿಂದ ಮೀನುಗಾರರೇ ಸ್ವತಃ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದರು ಎಂದು ಹೇಳಿದ್ದಾರೆ.
ಸಾಂಪ್ರದಾಯಿಕ ಮೀನುಗಾರರಿಗೆ ಅವಕಾಶ ನೀಡುವ ಮೂಲಕ ಬಡ ಮೀನುಗಾರರ ಆರ್ಥಿಕ ಸಬಲೀಕರಣಕ್ಕೆ ನೆರವು ಒದಗಿಸಲಾಗುವುದು. ಒಟ್ಟು 23 ಸಾವಿರ ಮೀನುಗಾರರಿಗೆ ವಿವಿಧ ಯೋಜನೆಯಡಿ ಲಾಭ ಒದಗಿಸುವುದಾಗಿ ತಿಳಿಸಿದರು.

Follow us on Social media

About the author